Home ಜಿಲ್ಲಾ ಸುದ್ದಿಗಳು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಸಂಸ್ಕೃತಿ ಚರಿತ್ರೆ ನಾಡು ನುಡಿಯ ಕಾಳಜಿ ಕೂಡಾ ಇರಬೇಕು.ಅದು ಬಹುಮುಖ್ಯ- ಡಾ.ಹೊನ್ಕಲ್

ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಸಂಸ್ಕೃತಿ ಚರಿತ್ರೆ ನಾಡು ನುಡಿಯ ಕಾಳಜಿ ಕೂಡಾ ಇರಬೇಕು.ಅದು ಬಹುಮುಖ್ಯ- ಡಾ.ಹೊನ್ಕಲ್

by Laxmikanth Nayak
0 comments

ಯಾದಗಿರಿ:ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು.. ಉನ್ನತಮಟ್ಟದ ಜೀವನ ರೂಪಿಸಿಕೋಬೇಕು. ಅದರ ಜೊತೆಗೆ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಸಂಸ್ಕೃತಿ ಚರಿತ್ರೆ ನಾಡು ನುಡಿಯ ಕಾಳಜಿ ಕೂಡಾ ಇರಬೇಕು. ಅದು ಬಹುಮುಖ್ಯ ಎಂದು ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಯಾದಗಿರಿಯ ಸರ್ಕಾರಿ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಮಾತನಾಡುತ್ತಾ ಮೇಲಿನಂತೆ ಕರೆ ನೀಡಿದರು.

‎ ಅವರು ನಾಡಿನ ಸಾಕ್ಷಿಪ್ರಜ್ಞೆಯ ಲೇಖಕ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಕಥೆ ಚಿತ್ರಕಥೆ ನಿರ್ದೇಶನದ *ಸ್ವಪ್ನಮಂಟಪ* ಸಿನೆಮಾ ಪ್ರದರ್ಶನದ ಆಶಯ ನುಡಿಯಲ್ಲಿ ಈ ನಾಡಿನ ಅಸ್ಮಿತೆಯಾದ ಡಾ.ಬರಗೂರರ ವಿವಿಧ ಪ್ರಕಾರದ ಸಾಹಿತ್ಯ ಹಾಗೂ ಚಲನಚಿತ್ರಗಳಲ್ಲಿಯ ಸಾಧನೆ ಹಾಗೂ ಪ್ರಸ್ತುತ ಸ್ವಪ್ನಮಂಟಪ ದ ಚಾರಿತ್ರಿಕ ಹಾಗೂ ವಾಸ್ತವಿಕ ಘಟನೆಗಳ ಹಿನ್ನೆಲೆಯ ಮನೋಜ್ಞ ಪ್ರೀತಿ ಪ್ರೇಮ ನಾಡು ನುಡಿಯ ಕಾಳಜಿಯ ಹಿನ್ನೆಲೆಯಲ್ಲಿ ಪರಿಚಯಸಿದರು.

‎ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿನ್ಸಿಪಾಲರಾದ ಡಾ.ಸುಭಾಸಚಂದ್ರ ಕೌಲಗಿಯವರು ವಹಿಸಿದ್ದರು.ಅವರು ಮಾತನಾಡಿ ತಮ್ಮ ವಿದ್ಯಾರ್ಥಿಗಳಿಗೆ ಪ್ರೊ.ಬರಗೂರರಂತಹ ನಾಡಿನ ಬಹುದೊಡ್ಡ ಲೇಖಕರನ್ನು ಪರಿಚಯಿಸುವ ಮೂಲಕ ಅವರ ನಿರ್ದೇಶನದ ಈ ಚಾರಿತ್ರಿಕ ಮಹತ್ವದ ಚಲನಚಿತ್ರ ತೋರಿಸುವ ಮೂಲಕ ವಿದ್ಯಾರ್ಥಿಗಳಿಗೆ ಮನೋರಂಜನೆಯ ಜೊತೆಗೆ ಸಾಂಸ್ಕೃತಿಕ ಪರಂಪರೆ,ನಾಡುನುಡಿಯ ಅಭಿಮಾನ ಬೆಳೆಸುವ ಈ ಚಿತ್ರದ ಪ್ರದರ್ಶನ ನಮ್ಮ ಕಾಲೇಜಿನಲ್ಲಿ ಏರ್ಪಡಿಸಿದ್ದು ಸಂತೋಷ.ಆ ಕಾರಣದಿಂದ ಪ್ರೊ.ಬರಗೂರರಿಗೂ ನಮ್ಮ ಜಿಲ್ಲೆಯ ಹೆಮ್ಮೆಯ ಲೇಖಕ ಡಾ.ಹೊನ್ಕಲ್ ರವರಿಗೆ ಅಭಿನಂದನೆಗಳು ಎಂದರು.

‎ಕಾರ್ಯಕ್ರಮವನ್ನು ಹಾಗೂ ಚಲನಚಿತ್ರ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಏರ್ಪಡಿಸಿ ಕಾರ್ಯಕ್ರಮವನ್ನು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಶೇಖರ ಕೊಂಕಲ್ ಅವರು ನಿರ್ವಹಿಸಿ ವಂದಿಸಿದರು. ಲೇಖಕಿ ಜಯದೇವಿ ಗಾಯಕವಾಡ, ಡಾ.ಲಿಂಗೇರಿ ಮುಂತಾದ ಅನೇಕ ಉಪನ್ಯಾಸಕರು, ಅಪಾರ ಸಂಖ್ಯೆಯ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ? ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್‌ ಸೇವೆಯಿಂದ ವಜಾ: ಪರಮೇಶ್ವರ್ ಮಾತಾಪಿತೃ ಸಂಹಾರ, ಕೊಂದು ತುಂಡು ತುಂಡು ಕತ್ತರಿಸಿದ ಮಗ! ಪ್ರೀತಿಯ ಕಾರಣಕ್ಕೆ ಭದ್ರಾವತಿಯಲ್ಲಿ ಜೋಡಿ ಕೊಲೆ! ಅಥಣಿಜಿಲ್ಲಾರಚನೆಗೆಹೆಚ್ಚಿದಒತ್ತಡ: ಸಿಎಂಭೇಟಿಯಾದಲಕ್ಷ್ಮಣಸವದಿನೇತೃತ್ವದನಿಯೋಗ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ