Home ಜಿಲ್ಲಾ ಸುದ್ದಿಗಳು ಜಿಲ್ಲೆಯ 66ಜನನೇಕಾರರಿಗೆಅಧ್ಯಯನಪ್ರವಾಸ

ಜಿಲ್ಲೆಯ 66ಜನನೇಕಾರರಿಗೆಅಧ್ಯಯನಪ್ರವಾಸ

by Laxmikanth Nayak
0 comments
ಜಿಲ್ಲೆಯ 66ಜನ ನೇಕಾರರಿಗೆ ಅಧ್ಯಯನ ಪ್ರವಾಸ


ಯಾದಗಿರಿ:ನ:24: 2024-25ನೇ ಸಾಲಿನ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಜಿಲ್ಲಾ ವಲಯ ಆರ್.ಎ.ಪಿ/ಆರ್.ಐ.ಪಿ ಯೋಜನೆಯಡಿ ಕರ್ನಾಟಕ, ಅಂದ್ರಪ್ರದೇಶ ಮತ್ತು ತಮೀಳುನಾಡು ರಾಜ್ಯಗಳಿಗೆ ಅಧ್ಯಯನ ಪ್ರವಾಸಕ್ಕಾಗಿ  ದಿನಾಂಕ:24.11.2025 ರಂದು  66 ಜನ ನೇಕಾರರು 10 ದಿನಗಳ ಅಧ್ಯಯನ ಪ್ರವಾಸಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಮೂಲಕ ಪ್ರಯಾಣ ಬೆಳೆಸಿದರು.

 ಶ್ರೀ ಲವೀಶ್ ಓರಡಿಯಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲವೀಶ್  ಒರಡಿಯಾ ಅವರು ಇಂದು ಹಸಿರು ನಿಶಾನೆ ತೋರಿಸುವ ಮೂಲಕ ನೇಕಾರರನ್ನು ಅಧ್ಯಯನ ಪ್ರವಾಸಕ್ಕೆ ಬೀಳಕೊಟ್ಟರು.

 

ವಿದ್ಯಾವಿಕಾಸ ಯೋಜನೆಯಡಿ ಶಾಲಾ ಸಮವಸ್ತç ಬಟ್ಟೆ ನೇಯುವ ಮತ್ತು ಕಾಟನ ಸೀರೆ  ನೇಯುವ  ಈ ನೇಕಾರರು ಕರ್ನಾಟಕ, ಅಂದ್ರಪ್ರದೇಶ ಮತ್ತು ತಮೀಳುನಾಡು ರಾಜ್ಯಗಳಿಗೆ ಪ್ರವಾಸಕ್ಕೆ ತೆರಳಿದ್ದಾರೆ.

 ನಾರಾಯಣಪೇಟ್ ಸಹಕಾರ ಸಂಘ ಕಾಟನ ಸೀರೆ, ಹೈದ್ರಾಬಾದ್‌ನ ನೇಕಾರ ಸೇವಾ ಕೇಂದ್ರ, ಪೋಚಂಪಲ್ಲಿ ಸಿಲ್ಕ್ (ಇಕ್ಲಟ್) ಸೀರೆ, ಕೋಯಲಗೂಡಂ ಕಾಟನ್ ಡ್ರೆಸ್ ಮಟೇರಿಯಲ್, ವೆಂಕಟಗಿರಿ ಕೈಮಗ್ಗ ತಂತ್ರಜ್ಷಾನ ಸಂಸ್ಥೆ ಮತ್ತು ಪಟ್ಟು ಸೀರೆ, ಕಾಂಚಿಪುರಂ ಅಣ್ಣಾ ಸೀರೆ, ಚನೈ ಟೆಕ್ಸ್ ಶೋರೂಮ್, ಕುಂಬಕೋಣ ತಿರುಭೂವನಂ ಸಿಲ್ಕ್ ಸೀರೆ, ಪಾಂಡಿಚೇರಿ ಸಿಲ್ಕ್ ಸೀರೆ, ತಂಜಾವೂರು ಸಿಲ್ಕ್ ಸೀರೆ, ಮಧುರೈ ಮೀನಾಕ್ಷಿ ಕಾಟನ್ ಸೀರೆ, ಕರೂರು ಬೆಡ್ ಶೀಟ್ & ಟಾವೇಲ್ಸ್, ಚೆನ್ನಮೈಲೈ ಸಹಕಾರ ಸಂಘಗಳಿಗೆ ಭೇಟಿ, ಇರೂಡೆ ಬೆಡ್ ಶೀಟ್ & ಜಮಖಾನಿ, ಭವಾನಿ ಸಹಕಾರ ಸಂಘಗಳಿಗೆ ಭೇಟಿ, ಸೇಲಂ ನೇಕಾರರ ಸೇವಾ ಕಂದ್ರ, ಬೆಂಗಳೂರು ಸಿಲ್ಕ್ ಬೋರ್ಡ್ ಬೋರ್ಡ್ ಮತ್ತು ಇತರ ಸ್ಥಳೀಯ ಸಹಕಾರ ತರಬೇತಿ ಸಂಸ್ಥೆಗಳಿಗೆ ಭೇಟಿ ನೀಡುವರು ಎಂದು ಸಹಾಯಕ ನಿರ್ದೆಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಜಿ.ಪಂ. ಯಾದಗಿರಿ ಅವರು ತಿಳಿಸಿದ್ದಾರೆ.

 ಈ ತರಹದ ಅಧ್ಯಯನ ಪ್ರವಾಸಗಳಿಂದ ರಾಜ್ಯದಲ್ಲಿ ತಯಾರಿಸಲಾಗುತ್ತಿರುವ ವಿವಿಧ ವಿನ್ಯಾಸಗಳ ಮತ್ತು ಮಾದರಿಯ ನೇಯುವ ಬಟ್ಟೆಗಳ ಕುರಿತು ನೇಕಾರರಿಗೆ ತಿಳುವಳಿಕೆ ಮೂಡಿಸುವ ಮೂಲಕ ಅವರಲ್ಲಿ ಕೌಶಲ್ಯಾಭಿವೃದ್ದಿ ಹೆಚ್ಚಿಸಿ ಅವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಸಹಕಾರಿ ಆಗುವುದಲ್ಲದೇ, ವಿನ್ಯಾಸಗಳ ಬದಲಾವಣೆಗೆ ಹಾಗೂ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ನೇಕಾರರು ನೇಯ್ಗೆಯಲ್ಲಿ ಬದಲಾವಣೇ ಮಾಡಿಕೊಳ್ಳಲು ಅನುಕೂಲವಾಗುವುದು ಎಂದು ಅವರು  ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಹಾಯಕ ನಿರ್ದೆಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಶ್ರೀ ಹೈದರ್ ಖಾನ, ಜವಳಿ ಇಲಾಖೆ ಸಿಬ್ಬಂದಿಯವರಾದ ಜವಳಿ ತನಿಖಾಧಿಕಾರಿ ಶ್ರೀ ರಮೇಶ್ ಓಂಕಾರ (ಪ್ರಭಾರ) ಉಪಸ್ಥಿತರಿದ್ದರು.

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಅಕ್ರಮ ಮದ್ಯದ ವಿರುದ್ಧ ಅಣಿಬಿಯಲ್ಲಿ ಜಾಗೃತಿ ಜಾಥಾ ರಾಯಚೂರು ಕೃಷಿ ವಿವಿ: ದಲಿತರ ಮೀಸಲಾತಿ ಸಹಿಸದವರಿಂದ ನೇಮಕಾತಿ ತಡೆಗೆ ಸಂಚು; ಜ.17ರ ಪರೀಕ್ಷೆಗೂ ಅಡ್ಡಿ ಸಾಧ್ಯತೆ? - ದಲಿ... ಗ್ರಾಮದ ಸ್ವಚ್ಛತೆಯಲ್ಲಿ ತ್ಯಾಜ್ಯ ನಿರ್ವಹಣೆ ಮುಖ್ಯ : ಸಿಇಒ ಲವೀಶ್ಒರಡಿಯಾ ದೇವತ್ಕಲ್–ಬಾಚಿಮಟ್ಟಿ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ಕೊಪ್ಪಳ ಮೂಲಕ ಬೆಂಗಳೂರಿಗೆ ಆರು ರೈಲುಗಳನ್ನು ಓಡಿಸಲು ಮತ್ತು ಸಿಂಧನೂರು ದಿಂದ ಬೆಂಗಳೂರಿಗೆ ಹತ್ತು ತಾಸಿನಲ್ಲಿ ತಲುಪುವುದ... ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ?