Home ರಾಜಕೀಯ ಕಲ್ಯಾಣ ಪರ್ವ ಉತ್ಸವ, ಕಾರ್ಯಾಲಯ ಉದ್ಘಾಟನೆ

ಕಲ್ಯಾಣ ಪರ್ವ ಉತ್ಸವ, ಕಾರ್ಯಾಲಯ ಉದ್ಘಾಟನೆ

by Laxmikanth Nayak
0 comments

ಕಲ್ಯಾಣ ಪರ್ವ ಉತ್ಸವ, ಕಾರ್ಯಾಲಯ ಉದ್ಘಾಟನೆ

ವರದಿ – ಸಂಗಮೇಶ ಎನ್ ಜವಾದಿ

ಬೀದರ: ಲಿಂಗೈಕ್ಯ ಲಿಂಗಾನಂದ ಸ್ವಾಮಿಗಳು, ಮಾತಾಜಿ ರವರ ನಿಸ್ವಾರ್ಥ ಸೇವೆಯ ಕಾರಣದಿಂದ ಬಸವ ತತ್ವ ನಾಡಿನ ಉದ್ದಕ್ಕೂ ಪಸರಿಸಲು ಸಾಧ್ಯವಾಯಿತು ಎಂದು ಬಸವ ಸೇವಾ ಪ್ರತಿಷ್ಠಾನದ ಮುಖ್ಯಸ್ಥೆ ಡಾ‌‌. ಗಂಗಾಂಬಿಕ ಪಾಟೀಲ ನುಡಿದರು.

ನಗರದ ಶಿವಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಕಲ್ಯಾಣ ಪರ್ವ ಉತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕಾರ್ಯಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಬಸವಕಲ್ಯಾಣದಲ್ಲಿ 108 ಅಡಿ ಬಸವಣ್ಣನವರ ಮೂರ್ತಿ ಸರ್ವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಇದಕ್ಕೆ ಅನೇಕ ಸಂಕಟಗಳು ಬಂದರೂ, ಅವುಗಳನ್ನು ನಿವಾಸಿ, ಇವತ್ತು ಅಂತರಾಷ್ಟ್ರೀಯ ಯಾತ್ರಾ ಸ್ಥಳವನ್ನಾಗಿ ಮಾಡಿದ ಕೀರ್ತ ಮಾತಾಜಿ ಅವರಿಗೆ ಸಲ್ಲುತ್ತದೆ ಎಂದರು.
ಬರುವ ಅಕ್ಟೋಬರ್ ತಿಂಗಳ 10,11,12 ರಂದು ನಡೆಯುವ ಕಲ್ಯಾಣ ಪರ್ವಕ್ಕೆ ಸರ್ವರೂ ಆಗಮಿಸಿ, ಉತ್ಸವ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಬಸವರಾಜ ಬುಳ್ಳಾ ಮಾತನಾಡಿ ಈ ವರ್ಷ ಉತ್ಸವವೂ ಅತ್ಯಂತ ಅರ್ಥಪೂರ್ಣವಾಗಿ ಆಗಬೇಕು. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಸ್ವಾಗತ ಸಮಿತಿಯ ಅಧ್ಯಕ್ಷ ಕಂಟೆಪ್ಪಾ ಗಂದಿಗುಡಿ, ಮೆರವಣಿಗೆ ಸಮಿತಿ ಅಧ್ಯಕ್ಷ ರಾಜೇಂದ್ರಕುಮಾರ್ ಗಂದಗೆ ಉತ್ಸವ ಕುರಿತು ಮಾತನಾಡಿದರು.

banner

ದಿವ್ಯ ಸಾನಿಧ್ಯ ವಹಿಸಿದ ಬಸವ ಧರ್ಮ ಪೀಠದ ಪೀಠಾಧ್ಯಕ್ಷ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ಲಿಂಗಾನಂದ ಅಪ್ಪಾಜಿ, ಮಾತಾಜಿ ರವರು ಹಾಕಿ ಕೊಟ್ಟ ಮಾರ್ಗದರ್ಶನದಂತೆ ನಡೆದುಕೊಂಡು ಹೋಗುತ್ತಿದ್ದೇವೆ.
ಕಲ್ಯಾಣ ಪರ್ವ ಉತ್ಸವವು ಸರ್ವ ರೀತಿಯಲ್ಲೂ ಯಶಸ್ವಿಯಾಗಬೇಕು. ದೇಶದ ತುಂಬೆಲ್ಲ ಬಸವ ತತ್ವ ಬೆಳಗಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಲಾವಣ್ಯ ಮಾತಾಜಿ ,
ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ
ಸೋಮಶೇಖರ್ ಪಾಟೀಲ ಗಾದಗಿ ಪ್ರಮುಖರಾದ ಕುಶಾಲರಾವ ಪಾಟೀಲ ಖಾಜಾಪೂರ್,
ಸಿದ್ದಯ್ಯಾ ಕವಡಿಮಠ, ರವಿ ಪಾಪಡೆ, ಸಿದ್ದು ಶೆಟ್ಟಗಾರ್, ಶಾಂತಾದೇವಿ ಬಿರಾದಾರ್,ಯೊಗೇಶ ಶ್ರೀಗೆರೆ, ಶ್ರೀಕಾಂತ ಭೋರಾಳೆ,ನಾಗಯ್ಯ ಸ್ವಾಮಿ ಮುಧೊಳ,ಸಂಗಮೇಶ ಎನ್ ಜವಾದಿ, ರಾಜಶೇಖರ ದೇವಣಿ
ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಜೇಂದ್ರ ಜೊನ್ನೆಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಸುರೇಶಕುಮಾರ್ ಸ್ವಾಮಿ ನಿರೂಪಿಸಿ, ವಂದಿಸಿದರು.

ವರದಿ – ಸಂಗಮೇಶ ಎನ್ ಜವಾದಿ

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ? ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್‌ ಸೇವೆಯಿಂದ ವಜಾ: ಪರಮೇಶ್ವರ್ ಮಾತಾಪಿತೃ ಸಂಹಾರ, ಕೊಂದು ತುಂಡು ತುಂಡು ಕತ್ತರಿಸಿದ ಮಗ! ಪ್ರೀತಿಯ ಕಾರಣಕ್ಕೆ ಭದ್ರಾವತಿಯಲ್ಲಿ ಜೋಡಿ ಕೊಲೆ! ಅಥಣಿಜಿಲ್ಲಾರಚನೆಗೆಹೆಚ್ಚಿದಒತ್ತಡ: ಸಿಎಂಭೇಟಿಯಾದಲಕ್ಷ್ಮಣಸವದಿನೇತೃತ್ವದನಿಯೋಗ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ