Home ರಾಜಕೀಯ ಶಹಪುರ: ಅತಿವೃಷ್ಟಿ ಬೆಳೆ ಹಾನಿ ಪರಿಹಾರ, ಗುತ್ತಿಗೆ ರೈತರಿಗೂ ಸಿಗಲಿ – ರೈತ ಸಂಘ ಆಗ್ರಹ

ಶಹಪುರ: ಅತಿವೃಷ್ಟಿ ಬೆಳೆ ಹಾನಿ ಪರಿಹಾರ, ಗುತ್ತಿಗೆ ರೈತರಿಗೂ ಸಿಗಲಿ – ರೈತ ಸಂಘ ಆಗ್ರಹ

by Laxmikanth Nayak
0 comments

ಲಕ್ಷ್ಮೀಕಾಂತ ನಾಯಕ

ಶಹಪುರ: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ಗುತ್ತಿಗೆ (ಲೀಸ್) ರೈತರಿಗೆ ನೇರವಾಗಿ ಪರಿಹಾರ ಧನ ತಲುಪಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘವು ಸರ್ಕಾರಕ್ಕೆ ಆಗ್ರಹಿಸಿದೆ. ಬೆಳೆ ಪರಿಹಾರ ಜಮೀನಿನ ಮಾಲೀಕರ ಖಾತೆಗೆ ಜಮೆಯಾಗುತ್ತಿರುವುದರಿಂದ ಗುತ್ತಿಗೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಂಘ ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಕಾರ್ಯದರ್ಶಿ ಭೀಮರಾಯ ಪೂಜಾರಿ, ಶಹಪುರ ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ರೈತ ನಾಗಪ್ಪ ತಂದೆ ಹನುಮಂತ ಪೂಜಾರಿ ಅವರ ಪ್ರಕರಣವನ್ನು ಉದಾಹರಿಸಿದರು. ನಾಗಪ್ಪ ಅವರು ಕಳೆದ ಎರಡು ವರ್ಷಗಳಿಂದ ಬೇರೊಬ್ಬರ ಜಮೀನನ್ನು ಗುತ್ತಿಗೆ ಪಡೆದು ಬೇಸಾಯ ಮಾಡುತ್ತಿದ್ದು, ಈ ವರ್ಷವೂ ಮೂರು ಎಕರೆ ಜಮೀನಿಗೆ ₹80,000 ಮುಂಗಡ ಹಣ ನೀಡಿ ಗುತ್ತಿಗೆ ಮಾಡಿಕೊಂಡಿದ್ದರು.

“ಭೂಮಿಯನ್ನು ಹದಗೊಳಿಸಲು ಮತ್ತು ಹತ್ತಿ ಬೀಜ ಬಿತ್ತನೆ ಮಾಡಲು ರೈತ ನಾಗಪ್ಪ ಅವರು ₹10,360 ರಿಂದ ₹15,000 ಖರ್ಚು ಮಾಡಿದ್ದಾರೆ. ಇದರ ಜೊತೆಗೆ ಸಾವಿರಾರು ರೂಪಾಯಿ ಮೌಲ್ಯದ ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಬಳಕೆಯೂ ಆಗಿದೆ. ಒಂದು ಎಕರೆಗೆ ಸುಮಾರು ₹30,000 ರಿಂದ ₹35,000 ವರೆಗೆ ಖರ್ಚು ಬಂದಿದೆ” ಎಂದು ಭೀಮರಾಯ ಪೂಜಾರಿ ವಿವರಿಸಿದರು.

banner

ಆದರೆ, ಅತಿವೃಷ್ಟಿಯಿಂದಾಗಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಸರ್ಕಾರ ಬೆಳೆ ನಷ್ಟದ ಸಮೀಕ್ಷೆ ಆರಂಭಿಸಿದ್ದು, ಪರಿಹಾರದ ಹಣ ನೇರವಾಗಿ ಜಮೀನಿನ ಮಾಲೀಕರಾದ ರಫೀಕ್ ಸಾಬ್ ಅವರ ಖಾತೆಗೆ ಜಮೆಯಾಗುತ್ತದೆ. “₹80,000 ಮುಂಗಡ ನೀಡಿ, ಎಕರೆಗೆ ₹35,000 ಖರ್ಚು ಮಾಡಿದ ಗುತ್ತಿಗೆ ರೈತ ಎಲ್ಲಿಗೆ ಹೋಗಬೇಕು?” ಎಂದು ಅವರು ಪ್ರಶ್ನಿಸಿದರು.

ಆದ್ದರಿಂದ, ಗುತ್ತಿಗೆ ಪಡೆದ ರೈತರಿಗೆ ನೇರವಾಗಿ ಪರಿಹಾರ ಹಣ ತಲುಪುವಂತೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿಲಾರೋದ್ದೀನ್ ಸಾಬ್ ಮುಲ್ಲಾ, ಹುಸೇನ್ ಸಾಬ್ ಮತ್ತು ನಾಗಪ್ಪ ಪೂಜಾರಿ ಉಪಸ್ಥಿತರಿದ್ದರು.

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ? ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್‌ ಸೇವೆಯಿಂದ ವಜಾ: ಪರಮೇಶ್ವರ್ ಮಾತಾಪಿತೃ ಸಂಹಾರ, ಕೊಂದು ತುಂಡು ತುಂಡು ಕತ್ತರಿಸಿದ ಮಗ! ಪ್ರೀತಿಯ ಕಾರಣಕ್ಕೆ ಭದ್ರಾವತಿಯಲ್ಲಿ ಜೋಡಿ ಕೊಲೆ! ಅಥಣಿಜಿಲ್ಲಾರಚನೆಗೆಹೆಚ್ಚಿದಒತ್ತಡ: ಸಿಎಂಭೇಟಿಯಾದಲಕ್ಷ್ಮಣಸವದಿನೇತೃತ್ವದನಿಯೋಗ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ